ಬುಧವಾರ, ಮಾರ್ಚ್ 25, 2009

ಮರೆತರೂ ಮರೆಯಲಾಗದ ಆ ಕಣ್ಣೀರ ಹನಿಯ ಪತ್ರ!

ಹಾಯ್ ಕೆಟ್ಟಹುಡುಗ,
ಇದೇನು? ಇಷ್ಟು ಪುಟ್ಟ ಡೈರಿ ಕೊಟ್ಟು ಆಟೋಗ್ರಾಫ್ ಬರಿ ಅಂತಿಯಲ್ಲ?ನಮ್ಮ ಗೆಳೆತನ ೨ ವರ್ಷದ್ದಾದರೂ ನಮ್ಮ ೨೦ ವರ್ಷಗಳ ಭಾವನೆಗಳನ್ನು,ಹಳೆಯ ಘಟನೆಗಳನ್ನು ,ಮನದ ಮಾತನ್ನುಹಂಚಿಕೊಂಡಿದ್ದೆವಲ್ಲ ಅದನ್ನೇಲ್ಲಾ ಈ ಪುಟ್ಟ ಡೈರಿಯಲ್ಲಿ ಹೇಗೆ ಇಳಿಸಲೋ?ನಿನ್ನ ಈ ಡೈರಿಯ ಮುಖಪುಟದಲ್ಲಿ ನಿನ್ನ ಮುದ್ದಾದ ಅಕ್ಷರದಲ್ಲಿ ಆಟೋಗ್ರಾಫ್ ಅನ್ನೋದು ಮೆಮೊರಿಚಿಪ್ ನಂತೆ ಬೇಕಾದಾಗ ಓದಿ ಮೆಲುಕು ಹಾಕಬಹುದು ಅಂತ ಬರೆದಿದ್ದಿಯಲ್ಲ ,ನಮ್ಮ ಹಿಂದಿನ ಘಟನೆಗಳನ್ನು ಮೆಲುಕು ಹಾಕಿದರೆ ನಿನಗೆ ಸಿಗುವುದು ಸಂತೋಷಕ್ಕಿಂತ ಹೆಚ್ಚು ನೋವು.
ಅಂದು ೧-೦೭-೨೦೦೪ ಡಿಗ್ರಿಯಲ್ಲಿನ ಮೊದಲ ದಿನ.ನಾನು,ಅನುಪಮ ಬಸ್ ಸ್ಟ್ಯಾಂಡ್ ಗೆ ಬಸ್ ಪಾಸ್ ತೆಗೆದುಕೊಳ್ಳಲು ಬಂದಾಗ ನೀನು ಕೊಟ್ಟ ಸ್ವೀಟ್ ಸ್ಮೈಲ್ ಇಂದೂ ನೆನಪಿದೆ.ಮುಂದೆ ಈ ಹುಡುಗ [ಅಪರಿಚಿತ?] ನನ್ನ ಜೀವನದಲ್ಲಿ ಇಷ್ಟೋಂದು ಸಂತೋಷ,ಪ್ರೀತಿ,ಸ್ನೇಹ,ಆತ್ಮಿಯತೆ ಅಷ್ಟೇ ನೋವನ್ನು ಕೊಡುತ್ತಾನೆಂದು ಎಂದಿಗೂ ಭಾವಿಸಿರಲಿಲ್ಲ.ಬೇಜಾರಾಗಬೇಡ,ಅತ್ಯಂತ ಫ್ರಾಂಕ್ ಆಗಿ ಬರಿತಿದ್ದಿನಿ.ನಾನಂತೂ ಯಾರೊಂದಿಗೂ ಹಂಚಿಕೊಳ್ಳಲಾಗದಂಥ ವಿಷಯಗಳನ್ನು ನಿನ್ನೊಂದಿಗೆ ಹಂಚಿಕೊಂಡಿದ್ದೆನೆ.ನಂಗೆ ನನ್ನ ಫ್ಯಾಮಿಲಿ ಬಿಟ್ಟರೆ ನನ್ನ ಲೈಫ ನಲ್ಲಿ ನಿನಗೆ ೨ ನೆ ಸ್ಥಾನ ಅಂಥ ಹೇಳಿದ್ದೆ.ಇಗಲೂ ಇದೆ.ಮುಂದೆಯೂ ಇರುವುದು.
ಡಿಯರ್ ಪುಟ್ಟ,
ನನಗೆ ಜೀವನದಲ್ಲಿ ಸ್ನೇಹದ ಬಗ್ಗೆ ನಂಬಿಕೆನೆ ಇರಲಿಲ್ಲ.ನಮ್ಮ ಜೀವನದಲ್ಲಿ ನಮಗೆ ನಾವೇ ಎನ್ನುವಂಥ ಭಾವ ಇತ್ತು.ಆದರೆ ನನಗೆ ಕಷ್ಟ ಬಂದಾಗ ನಾನು ಅಸಹಾಯಕತೆಯಿಂದ ಕೆಲವೊಮ್ಮೆ ಕಣ್ಣಿರಿಟ್ಟಾಗ ,ನನ್ನ ಕಣ್ಣಿರನ್ನು ತಡೆದು ಸಾಂತ್ವನ ಹೇಳಿದ ನೀನು ನನ್ನಲ್ಲಿ ಮತ್ತೆ ಗೆಳೆತನ ಎಂಬ ಶಬ್ದಕ್ಕೆ ಹೊಸ ಅರ್ಥ ನೀಡಿದೆ.ನಾನು ಜೀವನದಲ್ಲಿ ಇಟ್ಟುಕೊಂಡಿರುವ ಗುರಿ ಹಾಗೂ ಅದಕ್ಕಿರುವ ಅಡೆತಡೆಗಳನ್ನು ನಿನಗೆ ತಿಳಿಸಿದಾಗ ನನ್ನಲ್ಲಿ ಧೈರ್ಯ ತುಂಬಿ ಕಾನ್ಫಿಡೆನ್ಸ್ ಎನ್ನುವ ಸ್ಪೂರ್ಥಿ ನೀಡಿದೆ.
ಆದರೆ ಇದು ಎಷ್ಟು ದಿನ ಅಂಥ ಗೊತ್ತಿಲ್ಲ.ನಿನಗೆ ಗೊತ್ತಲ್ಲ ನಮ್ಮಲ್ಲಿ ಆಗಾಗ ಒಂದಲ್ಲ ಒಂದು ಕಾರಣಕ್ಕೆ ಏನಾದರೂ ಭಿನ್ನಾಭಿಪ್ರಾಯ ಬರತ್ತೆ ಅಥವಾ ಕಾರಣವೇ ಇಲ್ಲದೇ ದೂರ ಆಗ್ತಿವಿ. [ಈಗಿರುವ ಹಾಗೆ]
Our Friendship is not like a Pesi
“Yeh dil maange more”
Not like wills
“Made for each other”
But its Like LIC
“Zindagee ke saath bhi”
Zindagee ke baad bhi”
ಎಂದವ ನೀನು ಈಗೆಕೆ ನನ್ನಿಂದ ದೂರ ಹೋಗ್ತಿದ್ದಿಯಾ?ಗೊತ್ತಿಲ್ಲ.ನನ್ನಿಂದ ಏನೇ ತಪ್ಪಾದರೂI am extremely sorry ಪುಟ್ಟ.Please dnt avoid .ಮಾತಲ್ಲದಿದ್ದರೂ ಸರಿ ಒಂದು ಸ್ಮೈಲ್ ಕೊಡು.
Frankly speaking ನನಗೆ ನಿನ್ನ ಮೇಲೆ ಬಹಳ ಬೇಜಾರಾಗಿದೆ.ಇಷ್ಟೋಂದು?? ಆಗಿರೋ ನೀನು ಕಾಲೇಜಿನ ಎನ್.ಎಸ್.ಎಸ್. ಕ್ಯಾಂಪ್ ನಲ್ಲಿ ಒಂದು ಸಣ್ಣ [?] ಕಾರಣಕ್ಕಾಗಿ ನನ್ನನ್ನು ದ್ವೇಷಿಸುತ್ತಿದ್ದಿಯಲ್ಲ? ಒಂದು ಕಾಲದಲ್ಲಿ ನೀನು ಕಂಡರೆ ಆಕ್ಸಿಜನ್ ಸಿಕ್ಕ ಜೀವಿಯಂತೆ ಹಿರಿ ಹಿರಿ ಹಿಗ್ಗುತ್ತೇನೆ ಎಂದವ ,ಈಗ ನನ್ನನ್ನು ಕಂಡರೆ ಉಸಿರು ಕಟ್ಟಿ ಸಾಯುತ್ತೇನೋ ಎಂಬಂತೆ ದೂರ ಓಡ್ತಿಯಲ್ಲ,ನನ್ನನ್ನು ಅಷ್ಟೋಂದು ದ್ವೇಷಿಸುತ್ತಿಯಾ?ಡಿಯರ್ at least ಇದಕ್ಕೆ ಕಾರಣನಾದ್ರು ಹೇಳು.ನೀನೊಬ್ಬನೇ ನನಗೆ ಈ ವರ್ಷ ಹೊಸ ವರ್ಷಕ್ಕೆ ವಿಶ್ ಮಾಡದೆ ಇದ್ದವ.ನೀನೊಬ್ಬನೇ ಸಂಕ್ರಾಂತಿಗೆ ಸಿಹಿ ಕೊಡದವ.ಯಾಕೋ ಹುಡುಗ ನನ್ನ ಮೇಲೆ ಇಷ್ಟು ಸಿಟ್ಟು.?ನಾನು ಕೇವಲ ತಮಾಶೆಗೆಂದು ಹೇಳಿದ ಮಾತನ್ನು ನೀನು ಇಷ್ಟು ಸೀರಿಯಸ್ ಆಗಿ ತಗೋತಿಯ ಅಂತ ಗೊತ್ತಿರಲಿಲ್ಲ.ನನಗೂ ಬೇಜಾರಾಗಿದೆ ಯಾಕಂದ್ರೆ ಯಾರೇ ನನ್ನಿಂದ ದೂರ ಆದರೂ ನನ್ನ ಜೊತೆಗೆ ನನ್ನ ಪುಟ್ಟ ಇರುತ್ತಾನೆ ಎಂಬ ಭರವಸೆ ಇತ್ತು.ಯಾವಗ ನೀನು ನನ್ನನ್ನು ಗ್ರೂಪ್ ನಿಂದ ದೂರ ಮಾಡಿದ್ದಿಯೊ ಆಗ ನನಗೆ ಸಹಿಸಲಾಗಲಿಲ್ಲ.ಅದಕ್ಕಾಗಿ ಹಾಗೆ ಮಾತಾಡಿದ್ದೆ.
I am extremely sorry
ಮತ್ತೆ ಅದೇ ಹಳೆ ಕಥೆ ಕೊರಿತಿದ್ದಿನಿ ಅಂಥ ಅನ್ಕೊ ಬೇಡ.ನೀನೆ ಹೇಳಿದ್ದೆ ಹಳೆಯ ಘಟನೆಗಳನ್ನು ಮೆಲುಕು ಹಾಕಲು ಆಟೋಗ್ರಾಫ ಬೇಕು ಎಂದು.ಈ ಘಟನೆಯನ್ನು ನಾನೆಂದು ಮರೆಯಲ್ಲ.ಅದೇ ೨೮,೩೧ ಡಿಸೆಂಬರ್ ೨೦೦೬.My last day with you. ಅದರ ನಂತರ ನಿನ್ನಲ್ಲಿರುವ ನನ್ನ ಸ್ಥಾನವನ್ನು ನಾನು ಕಳಕೊಂಡೆನೆನೊ ಅನ್ಸತ್ತೆ.ಅದೇನೇ ಇರಲಿ ನಾನು ಬರೆದಿದ್ದು ಲೆಟರ್ ಅಂಥ ತಿಲ್ಕೋಬೇಡ,ನನ್ನ ನೆನಪಾದಾಗ ಓದು. ಬರೀ ಕಹಿ ಘಟನೆ ಬರೆದಿದ್ದೇನೆ ಅಂದ್ಕೊ ಬೇಡ.ನಿನ್ನೊಂದಿಗೆ ಮರೆಯಲಾಗದ ಸಂದರ್ಭಗಳನು ಕಳೆದಿದ್ದೆನೆ.ನನ್ನ ಎಲ್ಲ ಸುಖ ದು:ಖಗಳನ್ನು ಹಂಚಿಕೊಂಡಿದ್ದೆನೆ.ನಿನಗೆ ಇಷ್ಟ ಇತ್ತೋ ಇಲ್ಲವೋ ನನ್ನ ಎಲ್ಲ ಖಾಸಗಿ ವಿಷಯಗಳನ್ನು share ಮಾಡಿದ್ದೆನೆ. ನಿನಗೆ ಕೊರೆತ ಅನ್ನಿಸಬಹುದು.ಇರಲಿ ೨ ವರ್ಷಗಳ ಕಾಲ ಈ ಕೊರೆತ ಸಹಿಸಿಕೊಂಡಿದ್ದೀಯಲ್ಲ ಥ್ಯಾಂಕ್ಸ್ ಅ ಲೊಟ್.ನೀನು ನನಗೆ ಅನೇಕ ವಿಷಯಗಳಲ್ಲಿ ಬಹಳಷ್ಟು ಸಹಾಯ ಮಾಡಿದ್ದಿಯ.ನಾನಿಲ್ಲ ಅಂದರೆ ನನ್ನ ಮನೆಯಲ್ಲಿನವರ ಜೊತೆ ಸಂಭಂದ ಕಳೆದುಕೊಳ್ಳ ಬೇಡ.ನಿನ್ನ ಪ್ರೀತಿಯ ಅಮ್ಮ,ತಂಗಿ ನಿನಗೆ ಇದ್ದಾರೆ.ನಿನ್ನ ಸ್ನೇಹ ನನಗೆ ಅಪೂರ್ವ ಅನುಭವ ನೀಡಿತು.ನಿನ್ನಂತಹ ಸ್ನೇಹ ,ಪ್ರೀತಿ ಆತ್ಮಿಯತೆ ಎಲ್ಲರಿಗೂ ಸಿಗಲಿ ಅಂಥ ಬೇಡಿಕೊಳ್ಳುತ್ತೆನೆ.ನಿನ್ನೊಂದಿಗೆ ನಿನ್ನ ಅಮ್ಮನನ್ನೂ ಹಂಚಿಕೊಂಡೀದ್ದೆಯಲ್ಲ,ಇದಕ್ಕೆ ನಾನು ಆಭಾರಿಯಾಗಿದ್ದೆನೆ.ನ್ನಗು ನಿನಗು ಜಗಳ ಆಗಿ ಮಾತು ಬಿಟ್ಟು ೨-೩ ದಿನ ನಂತರ ಇನ್ನೂ ಕಂಟ್ರೋಲ್ ಮಾಡಲು ಆಗಲು ಸಾಧ್ಯವೇ ಇಲ್ಲ ಎಂದಾಗ ಅಮ್ಮನ ಹತ್ತಿರ “ಆಂಟಿ ನನ್ನೋಂದೊಗೆ ಮಾತಾಡೊದಿಲ್ಲ” ಅಂಥ ಕಂಪ್ಲೇಂಟ್ ಮಾಡಿದಾಗ ಅವರು ನನ್ಗೆ ಹೇಳಿದ ಸಮಾಧಾನ ಈಗಿನಂಥ ಸಂದರ್ಭದಲ್ಲಿ ನಾನೇ ನೆನೆಸಿಕೊಂಡು ಸಮಾಧಾನ ಪಟ್ಟುಕೊಳ್ಳುತ್ತೆನೆ.ನಾನು ಅತ್ಯಂತ ಗೌರವ ಕೊಡುವ ಅಮ್ಮಂದಿರಲ್ಲಿ ಅವರೂ ಒಬ್ಬರೂ.ಅವರ ಮನಸ್ಸನ್ನು ಎಂದಿಗೂ ನೋಯಿಸ ಬೇಡ.
ಇನ್ನೂ ಬರೀತಾ ಹೊದರೆ ಬೇಕಾದಷ್ಟು ವಿಷಯಗಳಿವೆ.ಅದೇ ಹೇಳಿದೆನಲ್ಲ,ಈ ಹರಿದುಹೋಗುವ ಹಾಳೆಯಲ್ಲಾಗಲಿ ನಿನ್ನ ಪುಟ್ಟ ಡೈರಿಯಲ್ಲಾಗಲಿ ಈ ಭಾವನೆಗಳನ್ನು ಹಂಚಿಕೊಳ್ಳಲು ಅಸಾಧ್ಯ.
ಸ್ನೇಹಿತರ ಸುವರ್ಣಾಕ್ಷರ ಹೊತ್ತ ಪುಸ್ತಕಕ್ಕೆ ಅದೆಂಥಾ ಮಾಂತ್ರಿಕ ಶಕ್ತಿ.ದು:ಖವಾದಾಗ ಮರುಗದಿರು ಮನವೇ,ನೋವಾದಾಗ ನಾ ಇರುವೆ ನಿನಗೆ ಎಂಬ ಸಾಂತ್ವನ .ಅಶಾಂತಿಯಿಂದ ಪ್ರಕ್ಷುಬ್ದ ಗೊಂಡ ಮನಕ್ಕೆ ತಂಗಾಳಿ,ನಿರಾಸೆಯ ಮಡುವಲ್ಲಿದ್ದಾಗ ಎಚ್ಚರವಾಣಿ.ಆತಂಕ ಗೊಂಡಾಗ ಒಂದಿಷ್ಟು ಭರವಸೆ,ಬಾಳು ಕಹಿಎನಿಸಿದಾಗ ಡಬ್ಬದಿಂದ ತೆಗೆದು ಚಪ್ಪರಿಸುವಂತೆ ಹಾಳೆಯಲ್ಲಿ ಬಚ್ಚಿಟ್ಟ ಸಿಹಿಗಳ ಸವಿ.ಇದೇ ಆಟೋಗ್ರಾಫ್.
ಡಿಯರ್ ,ಇಷ್ಟೋಂದು ಕಹಿಯಾಗಿ ಬರೆದಿದ್ದೇನೆ ಅಂದ್ಕೋ ಬೇಡ. ಸಣ್ಣ ಪುಟ್ಟ ವಿಷಯಗಳು ಜೀವನದಲ್ಲಿ ಅತೀವ ನೋವನ್ನುಂಟು ಮಾಡುತ್ತದೆ.ಉ.ದಾ:ಒಬ್ಬ ವ್ಯಕ್ತಿ ಗುಡ್ಡದ ಮೇಲೆ ಕುಳಿತುಕೊಳ್ಳಬಹುದು ಆದರೆ ಸೂಜಿಯ ಮೇಲಲ್ಲ.
ನೆನಪಿರಲಿ,ನಿನ್ನ ಜೀವನದ ಯಶಸ್ಸು ನಿನ್ನದಾಗಲಿ.ಮನಸ್ಸು ಸಂತೋಷದಿಂದಿರುವಾಗ ,ದು:ಖದಲ್ಲಿರುವಾಗ ನಿನ್ನ ಸುಖ ಮತ್ತು ದು:ಖವನ್ನು ಹಂಚಿಕೊಳ್ಳಲು ಸದಾ ಈ ಗೆಳತಿ ನಿನ್ನೊಂದಿಗೆ ಇರುವಳು ಎಂಬುದು ನೆನಪಿರಲಿ.ಪ್ರತಿಯೊಂದು ಫ್ರೇಂಡ್ ಶಿಪ್ ಡೆ ಮತ್ತು ಬರ್ತ್ ಡೆ ವಿಶ್ ಸ್ ಗೋಸ್ಕರ ಕಾಯಿತ್ತಿರು
ಕೇವಲ ೫ ಕಣ್ಣಿರು ಹನಿಗಳೊಂದಿಗೆ
ನಿನ್ನ ಅಂತರಂಗದ ಗೆಳತಿ
..........

ಮಂಗಳವಾರ, ಮಾರ್ಚ್ 24, 2009

ಅಂದು ಸಗಣಿ ಬಾಚಿದ್ದ ಬಂಗಾರಪ್ಪಗೆ ಈಗ ವಾಸನೆ ಬರುತ್ತಿದೆ!


ಮುಪ್ಪಿನ ಕಾಲದಲ್ಲಿ ಮನುಷ್ಯನಿಗೆ ತಾನು ಏನು ಮಾಡುತ್ತೆನೆ ಎಂದು ತಿಳಿಯುವುದಿಲ್ಲವಂತೆ.ತನಗೆ ವಯಸ್ಸು ೭೫ ದಾಟಿದರೂ ತಾನಿನ್ನೂ ಇಪ್ಪತ್ತೈದರ ಹುಡುಗ ಎಂದು ಕಂಡ ಕಂಡಲ್ಲಿ ಹೇಳಿಕೊಂಡು ತಿರುಗುವ ಬಂಗಾರಪ್ಪನವರಿಗೆ ಮುಪ್ಪಿನ ಕಾಲದಲ್ಲಿ ಬುದ್ದಿ ಭ್ರಮಣೆ ಆಗಿದೆಯೇ ಎಂದು ಜನರು ಆಡಿಕೊಳ್ಳುವಂತೆ ವರ್ತಿಸುತ್ತಿರುವುದು ಅವರ ಬಗ್ಗೆಯೇ ಜನರಲ್ಲಿ ಸಂಶಯ ಮೂಡುತ್ತಿದೆ.
ಒಂದು ರಾಜ್ಯದ ಮುಖ್ಯಮಂತ್ರಿಯಾಗಿ,೭ ಬಾರಿ ಎಂ.ಎಲ್.ಎ ಆಗಿ,೨ ಬಾರಿ ಲೋಕಸಭಾ ಸದಸ್ಯರಾಗಿ ರಾಜಕೀಯದ ಸಮಾಜಸೇವೆಯ ಮುಖವಾಡ ಹೊತ್ತಿರುವ ಬಂಗಾರಪ್ಪ ತಾವು ಸೇವೆ ಸಲ್ಲಿಸಿರುವ ಖುರ್ಚಿಗಾದರೂ ಗೌರವ ಸಲ್ಲಿಸಬಹುದಿತ್ತು.ಅದನ್ನ ಬಿಟ್ಟು ಮಂಗಗಳ ರೀತಿ ತನ್ನ ಲಾಭಕ್ಕೆ ಒಂದೊಂದು ಪಕ್ಷವನ್ನು ಅಪ್ಪಿಕೊಳ್ಳುವ ಬಂಗಾರಪ್ಪನವರಿಗೆ ಅದು ಎಲ್ಲಿಂದ ಬರ ಬೇಕು?
ರಾಜಕೀಯದಲ್ಲಿರುವವರೆಲ್ಲರೂ ಏನು ಸಾಚಾ ಅಲ್ಲವೇ ಅಲ್ಲ.ಆದರು ಮನಸಲ್ಲಿ ನಿಯತ್ತು ಎನ್ನುವ ಭಾವ ಇದ್ದರೆ ನಾವು ಮಾಡುವ ಕೆಲಸಕ್ಕೊಂದು ಅರ್ಥ. ಕೇವಲ ೫ ವರ್ಷಗಳಹಿಂದೆ ಬಂಗಾರಪ್ಪ ಎಲ್ಲಿ ಎಂದರೆ ಶ್ರೀರಾಮಚಂದ್ರಾಪುರ ಮಠದಲ್ಲಿ ಎಂದು ಎಲ್ಲ ಜನ ಹೇಳುತ್ತಿದ್ದರು!!.ಬಿ.ಜೆ.ಪಿ ಯಿಂದ ಸಮಾಜವಾದಿ ಪಕ್ಷಕ್ಕೆ ಬಂದಾಗ ಚುನಾವಾಣಾ ಸಮಯದಲ್ಲೂ ಸರಿ ಇದ್ದ ಬಂಗಾರಪ್ಪ, ನಂತರ ಮಠಕ್ಕೆ ಬಿ,ಜೆ.ಪಿ. ಜೆ.ಡಿ.ಎಸ್. ಮುಖಂಡರೂ ಬಂದ ಮೇಲೆ ಮಠದ ವಿರುದ್ದ ಸಿಟ್ಟೆದ್ದರು.ಇದೋಂದೆ ಕಾರಣವಲ್ಲ,ಸಾಗರ,ಸೊರಬ,ಶಿಕಾರಿಪುರ ಮುಂತಾದ ಕಡೆ [ಶಿವಮೊಗ್ಗದಲ್ಲಿ ೭ ರಲ್ಲಿ ೬ ಬಿ.ಜೆ.ಪಿ] ಬಿ.ಜೆ.ಪಿ. ಮೇಲುಗೈ ಸಾಧಿಸಲು ಮಠವೇ ಕಾರಣ, ತನಗೆ ಸಪೋರ್ಟ್ ಇಲ್ಲ,ಮಖಾಡೆ ಮಲಗಲು ಮಠವೇ ಕಾರಣ ಎಂಬುದು ಬಂಗಾರಪ್ಪ ಮಠದ ಮೇಲೆ ಸಿಟ್ಟಾಗಲು ಕಾರಣ.ರಾಜಕೀಯದಲ್ಲಿ ಸೋತಾಗ ಸಿಟ್ಟು ಸ್ವಾಭಾವಿಕ ಬಿಡಿ!!.
೪ ಗೊಡ್ಡು ಆಕಳು ಎಮ್ಮೆ,ಕರು ಸಾಕಿಕೊಂಡು ಫೋಟೊ ತೆಗೆಸಿಕೊಳ್ಳುವ ಸ್ವಾಮಿ ಎನ್ನುವ ಬಂಗಾರಪ್ಪ, ಅದೇ ಶ್ರೀಗಳಿಂದ ಇಂದು ಪ್ರತಿಯೊಬ್ಬನ ಬಾಯಿಯಲ್ಲಿ ಗೋವಿನ ಹೆಸರು ಬರುತ್ತಿರುವುದು ಮರೆತರೆ?ಭಾರತೀಯ ಗೋವಂಶ ಇದೇ ಎಂಬುದನ್ನೇ ಮರೆತ್ತಿದ್ದ ನಮಗೆ ನಮ್ಮಲ್ಲೂ ಅನೇಕ ಭಾರತೀಯ ತಳಿಗಳು ಇವೆ ಎಂದು ತೋರಿಸಿ,ಅದನ್ನು ಸಂರಕ್ಷಿಸಲು ಪ್ರೇರೆಪೀಸಿ,ಮಾರ್ಗದರ್ಶನ ಮಾಡುತ್ತಿರುವ ಶ್ರೀಗಳು ಶ್ರೀಮಠದಲ್ಲಿ ಇರುವ ಸಾವಿರ ಗೋವಿನ ಸಗಣಿ ಬಾಚುತ್ತ ಇರಲು ಸಾಧ್ಯವೆ?ಕೆಲವೇ ವರ್ಷಗಳ ಹಿಂದೆ ಅದೇ ಹಸುಗಳನ್ನು ಮೈದಡವಿ ಮಾತಾಡಿಸುತ್ತಿದ್ದ ಬಂಗಾರಪ್ಪನವರಿಗೆ ಈಗ ಅದೇ ಹಸುಗಳು ಗೊಡ್ಡಿನ ತರ ಕಾಣಿಸುತ್ತಿರುವುದು ವಿಪರ್ಯಾಸ.
ರಾಮಚಂದ್ರಾಪುರ ಮಠದ ಸ್ವಾಮಿಜಿ ಕೈಲಿ ವೊಟಿಲ್ಲ, ಅಲ್ಲಿ ಕೋಟಿಗಟ್ಟಲೆ ಹಣ ಏನಕ್ಕೆ ಕೊಟ್ಟಿರಿ ಎಂದು ಒಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಹೇಳುವ ಮಾತೆ?ನಿವೇನೋ ವೋಟಿಗಾಗೇ ನಿಮ್ಮ ಕಾಲದಲ್ಲಿ ದುಡ್ಡು ಹೆಂಡ ಹಂಚಿರಬಹುದು,ಎಲ್ಲವೂ ನಿಮ್ಮತರನೇ ಆಗ ಬೇಕೆಂದರೆ ಹೇಗೆ?
ಮಠ,ಸ್ವಾಮಿಜಿ,ಜಾತಿ ಹೀಗೆ ಯಾವುದಾದರೊಂದು ವಿವಾದ ಹೇಳಿಕೆ ನೀಡಿ ತಾವಿನ್ನೂ ಬದುಕಿದ್ದೇವೆ ಎಂದು ಜನರ ತಲುಪುವ ಮಾಧ್ಯಮ ಬಿಟ್ಟು ಒಳ್ಳೆ ಕೆಲಸದಿಂದ ದಿನ ನೆನೆಯುವಂತಾದರೆ ಜೀವನ ಸಾರ್ಥಕ ತಾನೆ?

ಅಷ್ಟಕ್ಕೂ ಈಗ ಜನ ಬದಲಾಗುತ್ತಿದ್ದಾರೆ.ಎಲ್ಲ ಜಾತಿಯ ವೋಟು ಅವರ ಜಾತಿಗೆ ಮಾತ್ರ ಬರದೇ ಇರುವುದು ಹೆಚ್ಚುತ್ತಿರುವುದು ಶಿಕ್ಷಿತರಲ್ಲಿ ಹೆಚ್ಚುತ್ತಿದೆ.ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು ೬ ದಶಕಗಳ ಮೇಲಾದರೂ ಬಡತನವನ್ನು ಸಾಕಿ ತಮ್ಮ ವೋಟ್ ಬ್ಯಾಂಕ ಮಾಡಿಕೊಂಡಿರುವ ರಾಜಕಾರಣಿಗಳಿಂದ ಬಡವರು ಇನ್ನೂ ನರಕಯಾತನೆಯಲ್ಲೇ ಕೊಳೆಯುತ್ತಿದ್ದಾರೆ.ಗೋವಿನ ಸಗಣಿಯನ್ನಾದರೂ ತೆಗೆದು ಜೀವನ ಸವೆಸುತ್ತಿರುವ ಶೂದ್ರರು ಅದರಿಂದಾದರೂ ಜೀವನ ಮಾಡುತ್ತಿರುವುದು ಬಂಗಾರಪ್ಪನವರಿಗೆ ನೋಡಲು ಸಾಧ್ಯವಿಲ್ಲವೆನೋ?

ಮುಗಿಸುವ ಮುನ್ನ:
"ತಾಕತ್ತಿದ್ದರೆ ರಾಮಚಂದ್ರಾಪುರ ಮಠದ ಶ್ರೀಗಳು ನನಗೆ ಟಿಕೇಟ್ ತಪ್ಪಿಸಲಿ-ಬಂಗಾರಪ್ಪ"
ಟಿಕೇಟ್ ನಿಮಗೆ ಸಿಗಬೇಕು;ನಿಮ್ಮನ್ನ ಮಕಾಡೆ ಕೆಡಗಿ ಮಜಾ ತಗೋ ಬೇಕು ಕಣ್ಲಾ ಅಂದ್ರಂತೆ ಶಿವಮೊಗ್ಗದ ಜನ!.