ಶನಿವಾರ, ಜನವರಿ 24, 2009

ಭಾರತದ ಮಾನ ಹರಾಜು ಹಾಕುತ್ತಿರುವುದು "ಸ್ಲಮ್ ಡಾಗೆ"?




ಳೆದ ಕೆಲವು ದಿನಗಳಿಂದ ಯಾವುದೇ ಪತ್ರಿಕೆ ಕೈಗೆತ್ತಿಕೊಂಡರೂ ಅಲ್ಲಿ ಇತ್ತೀಚಿನ ಹಿಟ್ ಚಿತ್ರ "ಸ್ಲಮ್ ಡಾಗ್ ಮೀಲೆನಿಯರ್" ಕುರಿತು ಒಂದಲ್ಲ ಒಂದು ಸುದ್ದಿ ಇದ್ದೇ ಇರುತ್ತದೆ. ಅದಕ್ಕೆ ವಿವಿಧ ಪ್ರಶಸ್ತಿ ಬಂದಿರುವುದು,ಆಸ್ಕರ್ ಗೆ ನಾಮಂಕಿತವಾಗಿರುವುದರಿಂದ ಹಿಡಿದು ಅದನ್ನು ಭಾರತದ "ಮಾನ" ಹರಾಜು ಹಾಕಿದ ಚಿತ್ರ ಎಂದು ತೆಗಳುವವರೆಗೂ ನಡೆದ ಪ್ರತಿ ಘಟನೆ ಅಂತರಾಷ್ಟ್ರೀಯ ಸುದ್ದಿ ಮಾಡಿತು.
ಇಲ್ಲಿ ಪುನ: ಚಿತ್ರದ ಕಥೆ ಹೇಳುವ ಅವಶ್ಯಕಥೆ ಇಲ್ಲ.ಎಲ್ಲರೂ ತೆಗಳುವ ಭರದಲ್ಲಿ ಇದೊಂದು ಸ್ಲಮ್ ಚಿತ್ರ. ಅಲ್ಲಿನ ಯುವಕ ೨೦ ಮಿಲಿಯನ್ ಹಣ ಗೆಲ್ಲುವುದೇ ಚಿತ್ರದ ಕಥಾವಳಿ ಎಂದು, ಅದರಲ್ಲಿ "ಸ್ಲಮ್" "ವ್ಯವಸ್ಥೆ" ಯನ್ನು ಧಾರಾಳವಾಗಿ ತೊರಿಸಿ ಭಾರತದ ಮಾನ ಹರಾಜಿಗೆ ಹಾಕಿದರು ಎಂದು ನುಡಿದರು.ಚಿತ್ರದ ವಿರುದ್ಧ ಕೋರ್ಟ್ ಮೆಟ್ಟಿಲನ್ನು ಹತ್ತಲಾಯಿತು.ಅಷ್ಟಕ್ಕೂ ಭಾರತದ ಮಾನ ಈ ಚಿತ್ರದಿಂದಲೇ ಹೋಯಿತೆ?
ಭಾರತಕ್ಕೆಂದು ಬರುವ ಪ್ರತಿಯೊಬ್ಬ ವಿದೇಶಿ ಪ್ರಜೆಗೂ ಈ ಚಿತ್ರದಲ್ಲಿ ತೊರಿಸಿರುವ ಘಟನಾವಳಿಗಳು ಅನುಭವಕ್ಕೆ ಬರದೇ ಇರದು.ಚಿತ್ರದಲ್ಲಿ Salim ಮತ್ತು Jamal ಭಾರತದ ಹೆಮ್ಮೆಯ ಪ್ರತೀಕವಾದ ತಾಜ್ ಮಹಲ್ ಗೆ ಅನೀರಿಕ್ಷಿತವಾಗಿ ಬರುತ್ತಾರೆ.ಅಲ್ಲೇ ಗೈಡ್ ಗಳು ಹೇಳುತ್ತಿದ್ದನ್ನು ಕೇಳಿ ಅಲ್ಲೇ ನಿಂತಿರುವಾಗ ವಿದೇಶಿಯರು ಬರುತ್ತಾರೆ.ಅವರು ಗೈಡ್ ಮಾಡಿ ಎಂದು ಹಣ ನೀಡುತ್ತಾರೆ.ಈತ "ಇಲ್ಲ ಸಲ್ಲದ ಕಥೆ" ಕಟ್ಟಿ ಹಣ ಗಳಿಸುತ್ತಾರೆ.
ನಮ್ಮ ದೇಶದ ಎಲ್ಲ ಪ್ರವಾಸಿ ಸ್ಥಳಗಳಲ್ಲೂ ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಪ್ರವಾಸಿಗರು ಮೋಸ ಹೋಗುತ್ತಿರುವುದು ಸುಳ್ಳೆ?ಅದೇ ರೀತಿ ಬೇಕಾ ಬಿಟ್ಟೆ ಹಣ ಸುಲಿಯುತ್ತಾರಲ್ಲಾ ಅವರ ನಿಯಂತ್ರಣಕ್ಕೆ "ಮಾನ ತಡೆಯಲು" ಯಾರದರೂ ಪ್ರಯತ್ನಿಸಿದ್ದಾರಾ? ದಿನಂಪ್ರತಿ ಲಕ್ಷಾಂತರ ಮಂದಿ ವಿದೇಶಿಗರು ಭಾರತಕ್ಕೆ ಬಂದು ಇಲ್ಲಿನ ಆಟೋ ದಿಂದ ಹಿಡಿದು ಪ್ರತಿಯೊಂದರಲ್ಲೂ ಮೋಸ ಹೋಗುತ್ತಾರೆ. ಅವರಲ್ಲಿ ಬೇಜಾನ್ ಹಣ ಇರಬಹುದು ಧಾರಳವಾಗಿ ಹಣ ಖರ್ಚು ಮಾಡಬಹುದು.ಇದನ್ನು ದುರುಪಯೋಗ ಪಡೆದವರು ಎಂದರೆ ಭಾರತದವರೇ!!.
ಇನ್ನು ಬಂದರೆ ಪೋಲಿಸ್ ವ್ಯವಸ್ಥೆ.ಚಿತ್ರದೂದ್ದಕ್ಕೂ "ಡಾಗ್" ಎನ್ನುತ್ತಿದ್ದರೆ ನಾವು ನಮ್ಮ ಪೋಲಿಸರು ಎಷ್ಟು ಬೇಗ ಸುಧಾರಿಸಿ ಬಿಟ್ಟರಲ್ಲ ಎಂದು ಖುಷಿಪಡಬೇಕು!!."ಡಾಗ್" ಎನ್ನುವುದು ಅವರಿಗೆ ನಾವು-ನೀವು ಹಾಯ್ ಎಂದ ಹಾಗೆ!! ಮೊನ್ನೆ ಅಷ್ಟೆ ನನ್ನ ಗೆಳತಿ ಒಬ್ಬಳು ಪಾಸ್ ಪೊರ್ಟ್ ಮಾಡಿಸುವ ಸಲುವಾಗಿ ಪೋಲಿಸ್ ಕಚೇರಿಗೆ ಹೋದವಳು ಅಲ್ಲಿನ ಶಬ್ದ ಕೇಳಿ ಅಳುವುದೊಂದೆ ಬಾಕಿ ಅದು ಅವಳ ಅಪ್ಪನ ಜೊತೆ ಹೋಗಿದ್ದರೂ..!!. ಪ್ರತಿಯೋಂದರಲ್ಲೂ ಹುಳಕನ್ನು ತುಂಬಿಕೊಂಡಿರುವ ನಾವು ಅದರ ಬಗ್ಗೆ ಪುಸ್ತಕ ಪ್ರಕಟಿಸಿದರೆ ಜರಿಯುತ್ತೇವೆ.ಸಿನೇಮಾ ಮಾಡಿದರೆ ಉಗಿಯುತ್ತೇವೆ.
ಹೌದು,ನಮ್ಮ ದೇಶದ ಮೇಲೆ ಪ್ರೀತಿ ಬೇಕು.ಕೀಳಾಗಿ ತೋರಿಸಿದರೆ,ಅದನ್ನೆ ನಿಜ ಎಂದು ವಿಶ್ವರೂಪ ದರ್ಶನ ಮಾಡಿಸಿದರೆ ಜರಿಯೋಣ.ಆದರೆ ನಾವು ಅವರಿಗೆ ಇಂಥ ಚಿತ್ರ ಮಾಡ ಬೇಡಿ,ಪುಸ್ತಕ ರೂಪದಲ್ಲಿ ತರ ಬೇಡಿ ಎಂದು ಮನವಿ ಮಾಡಿಕೊಳ್ಳುವುದರಲ್ಲೂ ನಿಯತ್ತು ಬೇಡವಾ? ನಾವು ಇಂಥಿಂತ ಕ್ರಮ ತೆಗೆದು ಕೊಂಡು ಡೆವಲಪ್ ಮಾಡಲಾಗುತ್ತಿದೆ ಎಂದು ಹೇಳಿಕೊಳ್ಳುವ ಧೈರ್ಯ ಯಾರಿಗಾದರೂ ಇದೆಯ?ಎಲ್ಲಾ ಬಕಾಸುರನ ಹೊಟ್ಟೆಗೆ ಯೋಜನೆ ಹಣ ಹೋದರೆ ಇನ್ನು ಡೆವಲಪ್ ಮೆಂಟ್ ಮಾತೆಲ್ಲಿ ಬಂತು.
ಹೀಗೆ ಪ್ರತಿಯೊಂದು ವಿಷಯದಲ್ಲೂ ಭಾರತದ ಮಾನ ನಗ್ನವಾಗಿ ವಿದೇಶಿಯರಿಗೆ ಗೋಚರಿಸುತ್ತಿರುವಾಗ ಅದರ ಬಗ್ಗೆ ಯಾರು ಮಾತನಾಡುವುದಿಲ್ಲ.ಆಗ ಭಾರತದ "ಮಾನ" ಹಾಳಾದರೂ ಪರವಾಗಿಲ್ಲ.ಯಾವುದೇ ಚಿತ್ರದಿಂದ ಹಾಳಾಗಬಾರದು ಅಷ್ಟೆ.

ಸ್ಲಮ್ ಡಾಗ್ ಚಿತ್ರದಲ್ಲಿ ಒಬ್ಬ ಅಮಾಯಕ ಬಡವ ಸ್ಲಮ್ ಇಂದ ಬಂದವನು ಸಮಾಜದಲ್ಲಿ ಒಳಗಾಗುವ ಕಹಿ ಘಟನೆಯನ್ನು ಬಿಚ್ಚಿಡುತ್ತದೆ.ಅಲ್ಲಿ Azharuddin Mohammed Ismail [Youngest Salim] ಮತ್ತು Ayush Mahesh Khedekar [Youngest Jamal] ಅಭಿನಯ ಮನಸಲ್ಲೇ ಉಳಿಯುವಂತದ್ದು."ಜಾತಿ ಯುದ್ದ"ದಿಂದ ತಾಯಿ ಎಲ್ಲರನ್ನು ಕಳೆದುಕೊಂಡಾಗ ಇವರು ಇನ್ನೂ ೧೨ ವರ್ಷದವರು.ನಂತರ ಕಸದ ರಾಶಿಯಲ್ಲ್ಲೇ ವಾಸ.ಜೊತೆಯಲ್ಲಿ ಅನಾಥವಾದ ಹುಡುಗಿಗೂ[ Latika] ತಮ್ಮ ನಡುವೆ ಸ್ಥಾನ ಕೊಡುತ್ತಾರೆ.ಇವರನ್ನು ಮಕ್ಕಳನ್ನು ಹಿಡಿದುಕೊಂಡು ಹೋಗುವ "ಭೀಕ್ಷಾಟಣೆ" ಕೇಂದ್ರದವರು ಹಿಡಿದುಕೊಂಡು ಭೀಕ್ಷಾಚಣೆಗೆ ಬಿಡುತ್ತಾರೆ.ಅಲ್ಲಿ ಕಣ್ಣು ತೆಗೆಯಲಾಗುತ್ತದೆ.ಅಲ್ಲಿಂದ ಈ ಮೂವರು ತಪ್ಪಿಸಿಕೊಂಡು ಬರುವುದೇ ಕಥೆಯ ಹಂದರ.ಸಲೀಮ್ ಮತ್ತು ಜಮಾಲ್ ಅಣ್ಣ ತಮ್ಮಂದಿರು.ಜಲೀಮ್ ಗೆ ಸಹನುಭೂತಿ ಇದ್ದರೆ, ಸಲೀಮ್ ಗೆ ಅದಿರುವುದಿಲ್ಲ.Latika ಮೇಲೆ ಕನಿಕರದಿಂದ ಆರಂಭವಾದ ಸ್ನೇಹ ಜಮಾಲ್ ಗೆ ಪ್ರೀತಿಯತ್ತ ಕರೆದುಕೊಂಡುಹೋಗುತ್ತದೆ.ಪ್ರೀತಿಯ ನೋಟ,ಅವಳಪಡೆಯ ಬೇಕೆಂಬ ಬಯಕೆ ,ಜೀವನದಲ್ಲಾದ ಕಹಿ ಘಟನೆಗಳು "ಮಿಲೇನಿಯರ್" ಆಗಲು ನೆರವಾಗುತ್ತದೆ."ಕೌನ್ ಬನೇಗಾ ಮೀಲೆನಿಯರ್ ಪತಿಯಲ್ಲಿ" ಗೆಲ್ಲುತ್ತಾನೆ ಈ ಸ್ಲಮ್ ಹುಡುಗ.ಅದರ ಮೂಲಕ "ಸ್ಲಮ್" ಗೆ ಕೀರ್ತಿ ತರುತ್ತಾನೆ.ಒಂದು ಮುಖ ಸ್ಲಮ್ ಜನರ ಕಪ್ಪು ಚುಕ್ಕೆ ತೋರಿಸಿದರೆ ಮತ್ತೊಂದರಲ್ಲಿ ಅವರ ಮಾನವಿಯತೆ ತೋರಿಸುತ್ತದೆ. ಕೊನೆಗೂ ಪ್ರೀತಿ ಗೆಲ್ಲುತ್ತದೆ!!.

ಕೇವಲ ಯಾವುದೇ ಚಿತ್ರದಲ್ಲಿ,ಸಿನೇಮಾದಲ್ಲಿ,ಪುಸ್ತಕದಲ್ಲಿ ತೋರಿಸಿದಾಕ್ಷಣ ,ಬರೆದಾಕ್ಷಣ ದೇಶದ ಮಾನ ಹೋದಂತೆ ಅಲ್ಲ.ಇನ್ನೂ ನಾವು ದೇಶದ ಮಾನ ಕಾಪಾಡುವಲ್ಲಿ ಹೆಜ್ಜೆ ಇಡುತ್ತಿಲ್ಲ.ಕೇವಲ ಸ್ವೀಸ್ ಬ್ಯಾಂಕ್ ನ ಖಾತೆಯಲ್ಲಿ ಬ್ಯಾಲೇನ್ಸ್ ಅನ್ನು ಹೆಚ್ಚು ಮಾಡುವತ್ತ ಇರುವಲ್ಲಿ ಬೊಟ್ಟು ಮಾಡಿ ತೋರಿಸುತ್ತದೆ.ಆದರೆ ಒಂದು ಸಿನೇಮಾವನ್ನು ತೆಗಳುವ ಭರದಲ್ಲಿ ನಮ್ಮಲ್ಲಿರುವ ತಪ್ಪನ್ನಾದರೂ ಒಂದು ಕ್ಷಣ ಅವಲೋಕಿಸಿಕೊಳ್ಳುವುದು ಒಳಿತು.
ಅದರಿಂದಾದರೂ ಭಾರತದ"ನಗ್ನ" ದರ್ಶನ ನಿಲ್ಲುವಂತಾಗುತ್ತದೆ. ಏಕೆಂದರೆ ಸಿನೇಮಾ ಇವತ್ತು ಬಂದು ನಾಳೆ ಹೋಗುತ್ತದೆ. ಆದರೆ ವಿದೇಶದಿಂದ ಬರುವ ಜನ? ದಿನವೂ ಬರುತ್ತಿರುತ್ತಾರೆ.!!

ಕೇವಲ ಕಥೆ ಇಂದಲೇ ಚಿತ್ರ ಹಿಟ್ಟಾಗದು ಅಥವಾ ಪ್ರಶಸ್ತಿ ಬಾರದು.ಅಲ್ಲಿನ ತಾಂತ್ರಿಕ ವರ್ಗ,ನಿರ್ದೇಶನ,ಕ್ಯಾಮರ ಕೈಚಳಕ ಮ್ಯೂಸಿಕ್ ಎಲ್ಲವನ್ನೂ ಒಳಗೊಂಡಿರುತ್ತದೆ.ಸ್ಲಮ್ ಡಾಗ್ ಚಿತ್ರ ಕೇವಲ ಕಥೆಗೆ ಮಾತ್ರ ಪ್ರಶಸ್ತಿ ಪಡೆಯುತ್ತಿಲ್ಲ.ಜೊತೆಗೆ ಇತರ ಬಹುತೇಕ ವಿಭಾಗಗಳಲ್ಲೂ ಪ್ರಶಸ್ತಿ ಪಡೆಯುತ್ತಿದೆ.ಇದು ಅವರ ಶ್ರಮವನ್ನು ತೋರಿಸುತ್ತದೆ ವಿನ: ಭಾರತದ ಮಾನ ಹಾಕಿ ಪಡೆದ ಪ್ರತಿಫಲ ಅಂತೂ ಖಂಡಿತ ಅಲ್ಲ.

ಸ್ಲಮ್ ಡಾಗ್ ದಿನದಿಂದ ದಿನಕ್ಕೆ ಪ್ರಶಸ್ತಿ ಪಡೆಯುತ್ತಿದೆ. ಮತ್ತಷ್ಟು ಮೀಲೆನಿಯರ್ ಆಗುತ್ತಿದೆ.ತೆಗಳುವ ಭರದಲ್ಲಿ ನಮ್ಮ ಸ್ತೀತಿಯನ್ನೇ ಮರೆತು ಜವಬ್ದಾರಿಯಿಂದ ನುಣುಚಿಕೊಳ್ಳುವುದು ಸರಿಯೇ?

ಗುರುವಾರ, ಜನವರಿ 22, 2009

ನೀನು ಜೊತೆ ಇರಲು




ನಿನ್ನೋಂದಿಗೆ ಇರಲು...




ನೀನು ಜೊತೆ ಇರಲು ಯಾವ ಗಳಿಗೆಗಳು ಬೇಡ
ಅನಿಸದು ನೀ ಉಣ್ಣಿಸಲು ಹಸಿವೆಯೇ ನೀಗದು
ನೀನ್ನ ತೋಳಲ್ಲಿ ಇರಲು ಬೆಳಗೆ ಆಗದು
ನಿನ್ನ ನಗು ನೋಡಲು ಕಣ್ಣು ಮಿಟುಕದು
ನೀ ಮುದ್ದಾಗಿ ಮಲಗಿರಲು ಸದ್ದಾಯಿತೆಂದು
ಉಸಿರ ಬೀಗಿ ಹಿಡಿಯುವೆ
ನೀ ಸನೀಹ ಬರಲು ಪ್ರೀತಿಯ ಭವ್ಯತೆಯಲ್ಲಿ ನಾ ಕರಗದೆ ಹೋಗೆನು
ಕಾಡಿಸಲು ನಾ ಕಾಡದಿ ಸೋಲ್ವೆನು ಸಹಜತೆಯಲಿ ಒಂದಾಗಿ.

************************************************

ಉಪಾಯ

ಒಂದು ಮುತ್ತು,ಎರಡು ಮುತ್ತು
ತುಂಬಾ ಮುತ್ತು ಕೊಟ್ಟೆ.
ಮತ್ತೇರುವುದನ್ನು ಕಂಡು
ಮುತ್ತಿನ ಹಾರ ಕೊಡಿಸಿ ಅಂದೆ
ಮೆತ್ತಗೆ ಮಲಗಿಬಿಟ್ಟರು !!

********************************************
ಜಾಮೀನು

ನನ್ನ ಪ್ರಿಇತಿಯಿಂದ ಸಿಗದು ಜಾಮೀನು
ಅದನ್ನು ಸಪ್ತಪದಿಯೆಂಬ
ಏಳು ಸುತ್ತಿನ ಕೋಟೆಯಲ್ಲಿಟ್ಟಿರುವೇನು. !

******************************************
ಹೀಗೊಂದು ಮಿಲನ

ಪ್ರೀಯಕರ ದೂರ ಇದ್ದರೆನಂತೆ
ವಿರಹದ ಜೊತೆ
ಭಾವನೆಗಳ ಸರಸ ಸಂವೇಧನೆ ಇದೆಯಲ್ಲಾ!

*****************************************************
-ನಿತಿನ್ ಜೊತೆ ಪ್ರತ್ಯುಷಾ :)

ಸೋಮವಾರ, ಜನವರಿ 19, 2009

ಸಾಸಕರ್ನಾ ಹುಡಕಂಡು ಬೆಳಗಾವಿ ಜನ ಗೋವಾ ಬೀಚ್ ಗೆ ಹೋಗಾವ್ರಂತೆ!!


ನ್ಲಾ, ಮಹಾರಾಸ್ಟ್ರಾದ ಗಡಿಯಾಗೆ ಬಸ್ನೆಲ್ಲ ಸುಟ್ಟಾವ್ರಂತೆ. ಆದ್ರೆ ಬೆಳಗಾವ್ಯಾಗೆ ಪಸಂದ ಪಸಂದ ಅಡಿಗೆ ಮಾಡಿ ಹಾಕ್ತ ಇದ್ದಾರಂತಲ್ಲ ಅವ್ರದ್ದು ಹೊಟ್ಟೆನೋ ಹೊಳೆಕೊಡ್ಳೊ ಅಂತ ಗೋತ್ತಗಾಕಿಲ್ಲಪ್ಪ.. ಬೆಳಗಾವಿನ ಉದ್ದಾರ ಮಾಡ್ತಿವಿ ಅಂತ ಬೆಂಗಳುರಿಂದ ಅಲ್ಲಿಗೆ ಎಲ್ಲ್ರನ್ನ ಕಟ್ಟಕಂಡು ಹೋಗೈತೆ ಸರ್ಕಾರ.ಬೆಳಗಾವಿನ ಉದ್ದಾರ ಮಾಡೋದು ಬಿಟ್ಟು ತಮ್ಮ ಉದ್ದಾರಾನ ಮಾಡಕಾತಾ ಇದ್ದಾರಲ್ಲ ಸಿವಾ!!
ಏನಾರು ಒಸಿ ಡೆವಲಪ್ ಮೇಂಟ್ ಆತದೆ, ನಮದು ೨ ನೇ ಕಾಪಿಟಲ್ ಸಿಟಿ ಆಗ್ಬಿಡ್ತದೆ ಅಂತ ಅಲ್ಲಿನ ಜನ ಬಹಿ ಖುಸಿಲಿದ್ರು.ಆದ್ರೆ ಆದ್ರೆ ಅಧಿವೇಸನ ಅಂತ ಅಲ್ಲಿ ಮಾಡ್ತಾ ಇರೋದೆನಪ್ಪ? ಅಲ್ಲಾ, ಆ ರೀತಿ ತಿಂಡಿ ಊಟ ಮೆನು ಇದ್ರೆ ಅದೇಂಗೆ ಸಭೆ -ಸಮಾಲೋಚನೆ ಮಾಡ್ತಾರೆ ಇವ್ರು?ಬೆಳ್ ಬೆಳಗ್ಗೆ ಹಣ್ಣಿನ ರಸ ಕುಡಕಂಡು,ಜೇನುತುಪ್ಪ ನೆಕ್ಕಂಡು ,ಇಡ್ಲಿ-ವಡ,ಪ್ಲೇನ್ ದೋಸ,ಮಸಲ ದೊಸ,ಸೆಟ್ ದೊಸಾ,ಕಾರ್ನ್ ಪರೋಟ,ಉಪ್ಪಿಟ್ಟು,ಬ್ರೇಡ್,ಮೊಟ್ಟೆ,ಆಮ್ಲೇಟ್ ಅಂತ ಅಡಿಗೆಮನೆಲೆ ಕುಂತಕಂಡು ಬಿಟ್ರೆ ಅದೇಂಗೆ ಅಧಿವೇಸನ ಕೊಠಡಿಗೆ ಬರ್ತಾರೆ ಕಣಣ್ಣಾ,ಇದ್ರಲ್ಲಿ ನಮ್ಮ ಸಾಸಕರ ತಪ್ಪೇನು ಇಲ್ಲ ಬಿಡ್ಲಾ . ಪಾಪ ಅಷ್ಟು ದೂರದಿಂದ ಬಂದವ್ರೆ ಇಷ್ಟೇಲ್ಲಾ ಆದರಾತಿಥ್ಯ ಮಾಡದೆ ಇದ್ರೆ ತಪ್ಪಾಗಾಕಿಲ್ವ,ಅತಿಥಿ ದೇವೋ ಭವ ಅಂತದ್ರು ವಿಚಾರ್ಸಿದಕ್ಕೆ ಕೋರೆ ಸಾಹೆಬ್ರು.
ನಮ್ಮ ನಾಡು ಆದರಾತಿಥ್ಯಕ್ಕೆ ಮೆಸರಾಗೈತೆ ಮಾಡ್ಲಿ ಬಿಡಣ್ಣ.ಇಷ್ಟೇಲ್ಲಾ ಆಗೋ ಹೊತ್ತಿಗೆ ೧೨.೩೦ ಕ್ಕೆ ಊಟ ರೇಡಿ ಆಗಿರ್ತೈತೆ.ದಾಲ್,ಚಿಕನ್,ದೊಸಾ ಕಿ ಪಪ್ಪು,ತಂದೂರಿ ರೊಟ್ಟಿ,ವೆಜ್ ಬಿರ್ಯಾನಿ ಅಬ್ಬಬ್ಬಾ ಲೀಸ್ಟ್ ಮಾಡಿ ಮುಗ್ಯಾಕಿಲ್ಲ ಬಿಡು. ಇಷ್ಟೇಲ್ಲಾ ತಿಂದ ಮೇಲೆ ಅವ್ರೆಂಗೆ ಕೇಳಬೇಕಾದ ಸಮಸ್ಯೆನ ಅಧಿವೇಸನದಾಗೆ ಕೇಳ್ತಾರಣ್ನ ಅಂತದ್ದ ಉಗ್ರಪ್ಪ. ರಾತ್ರೆ ಮಂಚೂರಿ ಸೂಪ್,ಕಡಾಯಿ ಪನ್ನಿರ್,ಮಿಕ್ಸ್ ವೆಜ್ ರೈತಾ,ರುಮಾಲಿ ರೊಟಿ,ಪ್ಲೆನ್ ರೈಸ್,ಚಾಕ್ಲೇಟ್ ಕೇಕ್,ಐಸ್ ಕ್ರೀಮ್, ಎಕ್ಸಟ್ರಾ ಎಕ್ಸಟ್ರಾ... ತಿಂದ ಮೇಲೆ ಅದೇಂಗೆ ಕರ್ಗ್ತೈತೆ ಕಣ್ಳಾ, ಅದಕ್ಕೆ ಸಾಣೆ ಒಸಿ ಇರ್ಲಿ ಅಂತ ಬೆಳಂಬೆಳಗ್ಗೆ ಜಾಗಿಂಗ್ ,ಯೋಗಾಸನ,ಜೀಮ್-ಪಮ್ಮು, ಎಲ್ಲಾ ಮಾಡ್ತಾ ಅವ್ರೆ.ಹೇಂಗಾವ್ರು ನಾವು ಬರ್ತಿವಿ ಅಂತ ಮಾಡವ್ರೆ ಒಸಿ ಪುಕ್ಕಟೆ ಸಿಕ್ಕದಾಗ ನಾವು ನೋಡೋಣ ಅಂತ ಅಂದಕಂಡಾವ್ರೆ ಕಾಣ ತದೆ.ಅಲ್ಲಾ ಕಣ್ಲಾ ನಮ್ಮ ಸಾಸಕರ ಬಾಡಿ ನೋಡಿದ್ರೆ ಯಾವಗಾದ್ರು ಜೀಮ್ ಮಾಡ್ದಂಗೆ ಕಾಣ್ತದ ?ಅಧಿವೇಸನ ಮುಗ್ದ ಮ್ಯಾಕೆ ಗೌರ್ವಮೇಂಟ್ ಅದನ್ನ ರೀಪೇರಿಗೆ ೨ ಕೋಟಿ ಕೋಡ್ತಾವ್ರ ನೋಡ್ ಬೇಕು.. ಅದೇ ನಮ್ಮ ಪೇಪರ್ನಾರು ಅದೇ ಸುದ್ದಿ ಮಾಡಾಕೆ ಬೆಳಗಾವಿಗೆ ಹೋಗರಲ್ಲ ಪಾಪ ಅವ್ರಿಗು ಸುದ್ದಿ ಇಲ್ಲ.ಏನೋ ಸಾಸಕರ ಸಂಗಡ ಕ್ರೀಕಿಟ್ಟು ಆಡಾಕೆ ಹೋಗಿ ಸೋತಕಂಡು ಬಂದವ್ರಲ್ಲ.!! ಅವ್ರದ್ದು ಏನ್ ಕಥೆ ಅಂತ ಗೋತ್ತಾಗಾಕಿಲ್ಲಪ್ಪ.
ಅತ್ಲಾಗಿ ಮರಾಠಿ ಸರಕಾರ ಬೆಳಗಾವಿಗೆ ಸೇರಿದ್ದು ಅಲ್ಲಿ ನಾವು ನಿಮ್ಮಂಗೆ ವಿಸೇಸ ಅಧಿವೇಸನ ಮಾಡ್ತಿವಿ . ಇಗೇಂಗಾದ್ರು ಕೋಟಿ ಗಟ್ಲೆ ಖರ್ಚು ಮಾಡಿ ಕರ್ನಾಟಕ ಸರಕಾರ ಬುಲ್ಡಿಂಗ್ ರೇಡಿ ಮಾಡೈತೆ. ಮಹಾರಾಷ್ಟ್ರ ಸರಕಾರದವ್ರು ಅಧಿವೆಸನ ಮಾಡದು ಹೌದು. ಮತ್ತೆ ಜಾಗ ಹುಡಕ್ ಬೇಕು. ಅದಕ್ಕಿಂತ ನಾವು ನಿಮಗೆ ಒಂದೈದು ಕೋಟಿ ಕೊಡ್ತಿವಿ ನಮಗು ೧೦ ದಿನಕ್ಕೆ ಆ ಬುಲ್ಡಿಂಗ್ ಯಥಾ ಸ್ಥಿತಿಲಿ ಕೊಡ್ರಣ್ಣಾ ಅಂತ ಮಹಾರಾಷ್ಟ್ರಾದ ಇಂಧನ ಸಚಿವ ವಿನಯ ಕೊರೆ ಬೆಳಗಾವಿ ತನಕ ಬಾಯಿ ಬಾಯಿ ಬಡಕಂಡು ಯಡಿಯೂರಪ್ಪನ ಕಿವಿ ತಾವ ಕಮಲದ ಹೂವು ಸಿಕ್ಸಿ ಹೋಗವ್ರಾಂತೆ.ಯಡ್ಡಿ ಅಧಿವೇಸನದಾಗೆ ಚರ್ಚೆ ಮಾಡಿ ಏನು ಅಂತ ಸೋಭಕ್ಕನ ತಾವ ಹೇಳ್ ಇಡ್ತಿನಿ ಕೇಳ್ಕಳಪ್ಪಾ ಅಂತೇಳಿ ಬೆಂಗಳೂರ್ನಾಗೆ ನಡೆದ ರಕ್ಷಣ ವೇದಿಕೆ ಕಾರ್ಯಕ್ರಮ ಕ್ಕೆ ಬಂದ್ರು.
ಒಟ್ನಲ್ಲಿ ಇನೈದು ದಿನಕ ಎಲ್ಲಾ ಗಂಟು ಮೂಟೆ ಕಟ್ತಾರ.ಆಮೇಲೆ ಸಾಸಕರಿಗೆ ರೊಟ್ಟಿ ಊಟ ನೆನಪಾಯ್ತದ್ಯಾ? ಈ ಕಡೆ ತಲೆ ಹಾಕಿ ಮಲ್ಕಾತಾರ ಅಂತಾ ಅಲ್ಲಿನ ಜನ ಸಾಸಕರ್ನಾ ಗೋವಾ ಬೀಚ್ ನಲ್ಲಿ ಮೀಟ್ ಮಾಡಿ ಕೇಳ್ತಾವ್ರಂತೆ...!